Wednesday, December 11, 2019

ಎಂದು ನಮಗೆ ನಿರ್ಭಯ ??



ಹೈದರಾಬಾದಿನಲ್ಲಿ ನಡೆದ ಅತ್ಯಾಚಾರದ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಇಲ್ಲಿ ಕೆಲವು ವಿಷಯಗಳ ಆತ್ಮಾವಲೋಕನ ಬಹು ಮುಖ್ಯ. ನನ್ನ ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.  ಇದಕ್ಕೆ ಕಾರಣ ಇಷ್ಟೇ .. ಘಟನೆ ಏಕೆ ನಡೆಯಿತು ಹಾಗೂ  ಮುಂದೆ ನಾವು ಹೇಗೆ ಎಚ್ಚರಿಕೆಯಿಂದ ಇರಬೇಕು. ಒಂದೊಂದೇ ಎಳೆ ಗಳನ್ನು ಬಿಡಿಸೋಣ. ಅತ್ಯಾಚಾರವಾದ     ದಿನ ಪೋಲೀಸರ ವರ್ತನೆ ಸರಿಯಿರಲಿಲ್ಲ.  ದೂರು ಕೊಡಲು ಪೊಲೀಸ್ ಠಾಣೆಗೆ ಹೋದರೆ ನಿಮ್ಮ ಹುಡುಗಿಗೆ  ಪ್ರಿಯಕರ ಇದ್ದಾನಾ ?  ನೀವು ಬೇರೆ ಠಾಣೆ ಯಲ್ಲಿ ದೂರು ಕೊಡಬೇಕು ಇತ್ಯಾದಿ.
ಒಂದು ಸಲ ಪೋಲೀಸರ ದೃಷ್ಟಿಯಿಂದ ಆಲೋಚಿಸೋಣ. ಅಲ್ಲಿಗೆ ಬರುವ ಈ ರೀತಿ ದುರುಗಳಲ್ಲಿ ಶೇಖಡಾ ೯೦ ರಷ್ಟು ಪ್ರಿಯಕರನೊಂದಿಗೆ ಓಡಿಹೋದವುಗಳೇ. ಅವರಿಗೆ ಸತ್ಯವಾದ  ವಿಷಯ ತಿಳಿದರೆ ಆ ದಿಕ್ಕಿನಲ್ಲಿ ತನಿಖೆ ಮಾಡಬಹುದು. ನಮ್ಮ  ಹೆಣ್ಣುಮಕ್ಕಳೆಲ್ಲಾ ಸರಿಯಾಗಿದ್ದಾರಾ?

ಕೊನೆಯದು ಆ ಅಪರಾಧಿಗಳನ್ನು ಎನ್ ಕೌಂಟರ್  ಮಾಡಿದ್ದು. ಕೋರ್ಟು ಕಚೇರಿ  ಅಂತ ವರ್ಷಾನುಗಟ್ಟಲೆ ತಿರುಗುವ ಬದಲು  ಬೇಗ ಶಿಕ್ಷೆ ಕೊಡುವ ನಿಟ್ಟಿನಲ್ಲಿ ಅವರನ್ನು ಕೊಂದರು. ಇದರಲ್ಲಿ ತಪ್ಪು ಸರಿ ತನಿಖೆಯ ನಂತರ ಇತ್ಯರ್ಥವಾಗಲಿ.
ಇನ್ನೊಂದು ಚರ್ಚೆ, ಅಪರಾಧಿಗಳೆಲ್ಲಾ ಮುಸಲ್ಮಾನರು. ಇದು ತಪ್ಪು ಕಲ್ಪನೆ, ಅಪರಾಧ ಮಾಡುವವನಿಗೆ  ಧರ್ಮ  ಇಲ್ಲ. ಅವನು ಎಲ್ಲವನ್ನೂ ಬಿಟ್ಟವನು. ಧರ್ಮ , ದೇವರು, ನಂಬಿಕೆ, ಸರಿ ತಪ್ಪುಗಳ ಅರಿವು ಇರುವವನು ಎಂದಿಗೂ ಈ ರೀತಿ ಮಾಡುವುದಿಲ್ಲ.
ಇದೇ  ನಮಗೆ ಪರಿಹಾರವನ್ನು ಸೂಚಿಸುತ್ತದೆ. ಸಮಾಜದಲ್ಲಿ ದೇವರ ಮೇಲೆ ನಂಬಿಕೆ ಹೆಚ್ಚಾಗಬೇಕು. ನಾವು ಮಾಡುವ ಸರಿ ತಪ್ಪುಗಳನ್ನು ವೀಕ್ಷಿಸುವವನು ಒಬ್ಬ ಇದ್ದಾನೆ ಎಂಬ ಧೃಢವಾದ ನಂಬಿಕೆ ಇರಬೇಕು. ಧರ್ಮ  ಗುರುಗಳಿಗೆ  ಇದೊಂದು ದೊಡ್ಡ ಜವಾಬ್ದಾರಿ. ಜನರನ್ನು ತಪ್ಪು ದಾರಿ ಹಿಡಿಯುವುದರಿಂದ ರಕ್ಷಿಸುವುದು.
ದೇವರೇ ಇಲ್ಲ ಎಂಬುವ ನಾಸ್ತಿಕರಿಗೂ ಪರಿಹಾರ ಉಂಟು . ಅದೇ ಸಕಾರಾತ್ಮ ಚಿಂತನೆ (Positive thinking). ಇತರರಿಗೆ ಸಹಾಯ ಮಾಡಬೇಕು ಎಂಬ ಭಾವನೆ ಮನದಲ್ಲಿದ್ದರೆ ಸಾಕು, ಆ ಮನುಷ್ಯ ಸುರಕ್ಷಿತವಾಗಿರುತ್ತಾನೆ. ನಾನು ಮಾಡುವ ಪಾಪ ಕರ್ಮಗಳು ನಮ್ಮನ್ನು ಜನ್ಮಗಳ ನಂತರವೂ   ಕಾಡುತ್ತದೆ.

ಇನ್ನೊಂದು ಮುಖ್ಯವಾದ ವಿಷಯ. ಎಲ್ಲ ಕ್ರಿಯೆಗೂ ಪ್ರೇರಣೆಯೇ  ಪ್ರಮುಖ ಕಾರಣ.  ಅತ್ಯಾಚಾರ ಇರಲಿ, ಕೊಲೆ ಇರಲಿ ಅದಕ್ಕೊಂದು ಪ್ರೇರಣೆ ಇದ್ದೇ ಇರುತ್ತದೆ. ಚರಿತ್ರೆ ಇದನ್ನು ಬಲಪಡಿಸುತ್ತದೆ. ಪುರಾಣದ ಕತೆಗಳನ್ನು ಬಿಡಿ.  ಹೊಸ ' ಪಿಂಕ್ ' ಸಿನಿಮಾ ವನ್ನು ಉದಾಹರಣೆಗೆ ತೆಗೆದುಕೊಳ್ಳಿ. ಅರೆ ನಗ್ನ ವಾಗಿ ಪುರುಷರ ಕೋಣೆಗೆ ಹೋಗುವುದೊಂದೇ ಪ್ರೇರಣೆ ಅಲ್ಲ. ಸಿನಿಮಾದ ಘಟನೆಗಳನ್ನು ಮೆಲುಕು ಹಾಕಿ, ಆ ಹುಡುಗಿ ತಾನು ವರ್ಜಿನ್ ಅಲ್ಲ  ಎನ್ನುತ್ತಾಳೆ. ೪ ಜನರೊಟ್ಟಿಗೆ ಮಲಗಿದವಳು ನನ್ನಜೊತೆ ಮಲಗಿದರೆ ತಪ್ಪೇನು ಅಂತ ಆ ಭಂಡ ಹುಡುಗರ ಮನೋಭಾವ. ಈಗ ಎಲ್ಲೆಡೆ ಆಲಿಂಗನದ ಸಂಸ್ಕೃತಿ (hugging culture). ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಿಯಕರನನ್ನು ಆಲಿಂಗಿಸಿ , ಚುಬಿಸಿ , ಬಾಯ್ ಬಾಯ್  ಹೇಳಿ ಬಸ್ ನಲ್ಲಿ ಕುಳಿತರೆ, ಆಕೆಯ ಬಗ್ಗೆ ಬಸ್ ಚಾಲಕ  ಏನಂತ ತಿಳೀತಾನೆ. ಇವಳು  ಸಾರ್ವಜನಿಕರ ಸ್ವತ್ತು. ನಾವೂ ಪ್ರಯತ್ನಿಸಬಹುದು ಅಂತ  ಹೆಗಲ ಮೇಲೆ /ಸೊಂಟಕ್ಕೆ ಕೈ ಹಾಕುತ್ತಾನೆ.

ಎಲ್ಲಾ ಸಂದರ್ಭದ್ಲಲೂ ಹೀಗೆ ಆಗುತ್ತದೆ ಎಂದೇನಿಲ್ಲ. ಕೆಲವೊಮ್ಮೆ ನಾವು ಸರಿಯಾಗಿದ್ದರೂ ನಮ್ಮನ್ನು ಕೆಣಕುವವರು ಇರುತ್ತಾರೆ. ನಮ್ಮ ಸಕಾರಾತ್ಮಕ ಚಿಂತನೆ ಹಾಗು ಯೋಗಾಭ್ಯಾಸಗಳಿಂದ ನಮ್ಮ ಸುತ್ತ ಒಂದು ಸುರಕ್ಷತಾ ಪರದೆ ಹಾಕಿಕೊಳ್ಳಲು  ಸಾಧ್ಯವಿದೆ. ಆದಕ್ಕೆ   ಕಠಿಣ ಪ್ರಯತ್ನದ ಮತ್ತು ಅಭ್ಯಾ ಸದ ಅಗತ್ಯವಿದೆ.

ಕೊನೆಗೆ ನಾನು ಹೇಳುವುದು ಇಷ್ಟೇ , ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿ ಇದೆ. ನಮ್ಮ ಹಿರಿಯರು ತೋರಿಸಿದ ಮಾರ್ಗದಲ್ಲಿ ನಡೆಯುವುದು, ಧರ್ಮದ ಬಗ್ಗೆ ಗೌರವವಿಡುವುದು, ಪ್ರಚೋದನೆಗೆ ಅವಕಾಶ ಕೊಡದಿರುವುದರಿಂದ  ನಮ್ಮನ್ನು ನಾವು ಸುರಕ್ಷಿಸಬಹುದು.














No comments:

Post a Comment